Friday, February 21, 2020

ಎಂದೆನಳು ಎಂಬೆನಳು

ಹರಿವ‌ ನೀರ ನಿಲ್ಲಿಸಲು
ಬರಸೆಳೆದು ಬಿಗಿದಪ್ಪಿ ಚುಂಬಿಸಲು
ಹಸಿದ ಹುಲಿ ಹಾಲ ತರಲು
ಬಸಿದ ಭುವಿಯ ನೆಗೆಯಲು
ತನಗರಿವಿಲ್ಲ ತಾನೇನೆಂದು ತಿಳಿಯಲು
ಇಂದು ಇಂದಿಗೆ ಮುಗಿದಿಲ್ಲ
ನಾಳಿನ ಕ್ಷಣ ಕಾಯುತಿಹುದು
ತನ್ನವರಾರು ಇತವರಾರೆಂದೆನಲು
ಇಹುದೂಂದೆ ಮಂತ್ರ ನಾಳೆ ಗೆಳಲು
ತನಗೆ ತಾನೆಂದೆನಲು
ಲೋಕವಿಹುದು‌ ಜೊತೆ ಬರಿ ನೆರಳು
ಇಹುದೊಂದೆ ಜೀವ‌ ಹರಿಯನರಿಲು
                             -ಕೌಶಿಕ್ ರೈ ಕೆ

Monday, July 29, 2019

ಐಕ್ಯ

                               ಐಕ್ಯ       

ಎನ್ನ ಮನ ಕಾಜಾಣ ಜಾಗವಾಳೋ ಕಾಂಚಾಣ
ಬತ್ತಿ ಬರಿದಾದ ಕೆರೆಯಂಗಳದಿ ಸೋಪಾನ
ಸೋಗೆಯಂದಲದಿ ಬಟಾಬಯಲೊಳಗಣ
ಮೈಯ್ಯೊಡ್ಡಿ ಕೇಳಿ ಹಾಡುವ  ಸುಮದುರ ಗಾನ

                  ಮತ್ತೇರಿದಾ ಮನವ ತಣಿಸಲೆಂತು ಮಾನವ
                 ಕಾಡಿಹುದೊ ನಿನಗಾಗೇ ಮುಂಬರುವ ಸಾವ
                 ಶೂಲದಿ ಬಿದ್ದವ ಬದುಕುವನೇ ಮೂರು ದಿನವ
                 ಕೇಡುಗಳಕೆ ತನ್ನ ಸರವೇ ಸಂಕೋಲೆ ಜಿಹ್ವಾ

ಕಲಿತು ಬಾಳು  ನೀ ನಮ್ಮೊಡಗೂಡಿ   ಕಲೆತು
ಸಿಗದು ಜೀವನ ಪಾಠ ನಿನ್ನನರಿಯದ ಜಗವರಿತು
ವೇದ ಕಲಿ ನಾಡ ಪಾದ ತೊಳಿ ಸರಿ ಜನರ ಒಳಿತು
ಮುನ್ನುಗ್ಗದಿರು ನೀ ನಿನ್ನನರಿ ಕುಳಿತು

              ಸೂತಕದ ಜಾಗವಿದು ನಿನಗೆ ನೀನೆ ಸಖನಾಗಲಿ
              ನೀನು ನಾನೆಂಬೆದು ಪರಶಿವನ ಆತ್ಮದಲಿ
              ಐಕ್ಯದಲ್ಲಿ ಶ್ರೀನಿವಾಸವಾಸ ಪಾದಕಮಲದಲಿ
              ಎನ್ನ ಮನ ಸಗ್ಗದಳು ನಾಕದಲು ಮಹಾಲಿಂಗನಲಿ

                                                                                                                           -- ಕೌಶಿಕ್  ರೈ ಕೆ 
                                           
 
                     

ಎಂದೆನಳು ಎಂಬೆನಳು

ಹರಿವ‌ ನೀರ ನಿಲ್ಲಿಸಲು ಬರಸೆಳೆದು ಬಿಗಿದಪ್ಪಿ ಚುಂಬಿಸಲು ಹಸಿದ ಹುಲಿ ಹಾಲ ತರಲು ಬಸಿದ ಭುವಿಯ ನೆಗೆಯಲು ತನಗರಿವಿಲ್ಲ ತಾನೇನೆಂದು ತಿಳಿಯಲು ಇಂದು ಇಂದಿಗೆ ಮುಗಿದಿಲ್ಲ ನಾಳ...