ಬರಸೆಳೆದು ಬಿಗಿದಪ್ಪಿ ಚುಂಬಿಸಲು
ಹಸಿದ ಹುಲಿ ಹಾಲ ತರಲು
ಬಸಿದ ಭುವಿಯ ನೆಗೆಯಲು
ತನಗರಿವಿಲ್ಲ ತಾನೇನೆಂದು ತಿಳಿಯಲು
ಇಂದು ಇಂದಿಗೆ ಮುಗಿದಿಲ್ಲ
ನಾಳಿನ ಕ್ಷಣ ಕಾಯುತಿಹುದು
ತನ್ನವರಾರು ಇತವರಾರೆಂದೆನಲು
ಇಹುದೂಂದೆ ಮಂತ್ರ ನಾಳೆ ಗೆಳಲು
ತನಗೆ ತಾನೆಂದೆನಲು
ಲೋಕವಿಹುದು ಜೊತೆ ಬರಿ ನೆರಳು
ಇಹುದೊಂದೆ ಜೀವ ಹರಿಯನರಿಲು
-ಕೌಶಿಕ್ ರೈ ಕೆ